Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.

By Dhanya.C Poojari
On: 25/05/2026 |
25 Views
Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.
---Advertisement---
Sandhya Suraksha Scheme 2025 : ಸಂಧ್ಯಾ ಸುರಕ್ಷಾ ಯೋಜನೆ ವಯಸ್ಸಾದವರಿಗೆ ಸರ್ಕಾರದಿಂದ ದೊಡ್ಡ ಗಿಫ್ಟ್! ಇನ್ನು ಮುಂದೆ ವಯಸ್ಕರರ ಖಾತೆಗೆ ಪ್ರತಿ ತಿಂಗಳು ₹1,200 ರೂಪಾಯಿ ನೇರವಾಗಿ ಜಯವಾಗುತ್ತದೆ.

Sandhya Suraksha Scheme 2025 : ಕರ್ನಾಟಕ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿದರೆ ಇನ್ನು ಮುಂದೆ ನಿಮಗೆ ಪ್ರತಿ ತಿಂಗಳು ಸುಮಾರು ₹1200 ರೂಪಾಯಿ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗುತ್ತದೆ. ಈ ಯೋಜನೆಗೆ ಅರ್ಜಿ ವಿಧಾನ, ಕೊನೆಯ ದಿನಾಂಕ, ಅರ್ಹತೆ, ಮತ್ತು ಅಗತ್ಯ ದಾಖಲೆಗಳನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ. 

Also Read :-  DRDO Recruitment 2025 : 764 ಹುದ್ದೆಗಳು ಬಿಡುಗಡೆ! ಅರ್ಜಿ ಹಾಕುವ ವಿಧಾನ, ಅರ್ಹತೆ, ವೇತನ – ಸಂಪೂರ್ಣ ಮಾಹಿತಿ!

ಸಂಧ್ಯಾ ಸುರಕ್ಷಾ ಯೋಜನೆ 

ವಿಷಯವಿವರ
ಯೋಜನೆಯ ಹೆಸರುಸಂಧ್ಯಾ ಸುರಕ್ಷಾ ಯೋಜನೆ
ಯಾರಿಗೆ65+ ವಯಸ್ಸಿನ ಕಡಿಮೆ ಆದಾಯದ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ
ಪಿಂಚಣಿ ಮೊತ್ತ₹1,200 / ತಿಂಗಳು
ಅಸ್ತಿತ್ವ ಪರಿಶೀಲನೆವಾರ್ಷಿಕ ಲೈಫ್ ಸರ್ಟಿಫಿಕೆಟ್ ಕಡ್ಡಾಯ
ಅರ್ಜಿಯ ವಿಧಾನಆನ್‌ಲೈನ್ / ಆಫ್‌ಲೈನ್
ಅಧಿಕೃತ ಜಾಲತಾಣnadakacheri.karnataka.gov.in

ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ? 

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವವರು ಕೆಳಗಿನ ಹಂತದ ಅಂಶಗಳನ್ನು ಒಳಗೊಂಡಿರಬೇಕು. 

  • ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರಬೇಕು. 
  • ಅರ್ಜಿದಾರರಿಗೆ ಕನಿಷ್ಠ 65 ವರ್ಷಗಳು ಕಡ್ಡಾಯವಾಗಿ ಇರಬೇಕು. 
  • ಕುಟುಂಬದ ವಾರ್ಷಿಕ ಆದಾಯವು ಏಕಾಂಗಿಗಳಾದರೆ 20,000 ಕ್ಕಿಂತ ಕಡಿಮೆ ಇರಬೇಕು ಹಾಗೂ ದಂಪತಿಗಳಾದರೆ 32,೦೦೦ ಕ್ಕಿಂತ ಕಡಿಮೆ ಇರಬೇಕು.
  • ಸಣ್ಣ ರೈತರು, ನೇಕಾರರು, ಮೀನುಗಾರರು, ಕಾರ್ಮಿಕರು, ಇಂತಹ ಹಲವಾರು ವೃದ್ಧರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. 
  • ಈ ಯೋಜನೆ ಪಡೆಯಲು ಯಾವುದೇ ರೀತಿಯ ವಯಸ್ಕರ ಪಿಂಚಣಿ ಪಡಿಯುತ್ತಿರಬಾರದು.

ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳು ? 

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಇರಬೇಕು. ನೀವೇ ಸ್ವತಃ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದಾದರೆ ನಿಮ್ಮ ದಾಖಲೆಗಳನ್ನು PDF / JPEG ಈ ರೂಪದಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕು. 

  • ಅರ್ಜಿದಾರರ ಆಧಾರ್ ಕಾರ್ಡ್ 
  • ಮತದಾರರ ಚೀಟಿ 
  • ಜನನ ಪ್ರಮಾಣ ಪತ್ರ 
  • ನಿವಾಸ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ 
  • ಆದಾಯ ಪ್ರಮಾಣ ಪತ್ರ 
  • 4 ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಹೇಗೆ ಸಲ್ಲಿಸುವುದು ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಎರಡು ರೀತಿಯಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಮೊದಲನೆಯದು ಆನ್ಲೈನ್ ಮೂಲಕ ಹಾಗೂ ಎರಡನೆಯದು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ?

  • ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ nadakacheri.karnataka.gov.in ಗೆ ಭೇಟಿ ನೀಡಿ 
  • ನಂತರ “Online Application” ಇದನ್ನು ಆಯ್ಕೆ ಮಾಡಿಕೊಳ್ಳಿ 
  • ನಿಮ್ಮ ಮೊಬೈಲ್ ಸಂಖ್ಯೆ ಬಳಸಿ OTP ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ 
  • ‘Sandhya Suraksha’ ಸೇವೆಯನ್ನು ಆರಿಸಿಕೊಳ್ಳಿ 
  • ನಿಮ್ಮ ಮುಂದೆ ಒಂದು ಅರ್ಜಿಯ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ 
  • ನಂತರ ನಿಮ್ಮ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ವಿವರಗಳ ಪಟ್ಟಿ ಮೇಲೆ ಲೇಖನದಲ್ಲಿ ನೀಡಲಾಗಿದೆ. 
  • ಅರ್ಜಿ ಶುಲ್ಕ ಪಾವತಿಸಿ 
  • ಕೊನೆಯದಾಗಿ ನಿಮ್ಮ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ನಂತರ ನಿಮ್ಮ ಅರ್ಜಿ ಫಾರಂ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. 
  • ಅರ್ಜಿ ಸಲ್ಲಿಸಿದ ನಂತರ Acknowledgement slip ಇದನ್ನು ಡೌನ್ಲೋಡ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. 

ಆಫ್ಲೈನ್ ಮೂಲಕ ಅರ್ಜಿ ಹೇಗೆ ಸಲ್ಲಿಸುವುದು ?

ನೀವು ನಿಮ್ಮ ಅರ್ಜಿಯನ್ನು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ನೀವು ನಾಡಕಚೇರಿ ಅಥವಾ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ತುಂಬಾ ಸುಲಭವಾಗಿ ಸಲ್ಲಿಸಬಹುದು. ಹೋಗುವಾಗ ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ. 

ಈ ಯೋಜನೆಯಿಂದ ಆಗುವ ಲಾಭಗಳು ?

ಸಂಧ್ಯಾ ಸುರಕ್ಷಾ ಯೋಜನೆಯಿಂದ ಒಟ್ಟು 4 ರೀತಿಯ ಲಾಭಗಳಿವೆ. 

  • ಪ್ರತಿ ತಿಂಗಳು ₹1,200 : ಈ ಯೋಜನೆಯಿಂದ 65 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ಸುಮಾರು ₹1,200 ರೂಪಾಯಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾವಾಗುತ್ತದೆ. 
  • ವೈದ್ಯಕೀಯ ಸೌಲಭ್ಯ : ಈ ಯೋಜನೆಯಿಂದ ಅರ್ಜಿದಾರರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆಯು ಕೂಡ ನೆರವಾಗುತ್ತದೆ. 
  • KSRTC ಪಾಸ್ ರಿಯಾಯಿತಿ : ಹಿರಿಯ ನಾಗರಿಕರಿಗೆ ಪ್ರಯಣಕ್ಕೆ KSRTC ಬಸ್ ಪಾಸ್ ಮೇಲೆ ವಿಶೇಷವಾದ ರಿಯಾಯಿತಿಯು ಕೂಡ ಇರುತ್ತದೆ. 
  • ಸುರಕ್ಷತಾ ನೆರವು : ಸರ್ಕಾರದ ಹಿರಿಯ ನಾಗರಿಕರಿಗೆ ವಿಶೇಷವಾದ ಹೆಲ್ಪ್ ಲೈನ್ ಹಾಗೂ ಡಿಕೆ ಕೇಂದ್ರಗಳನ್ನು ನಿರ್ವಹಿಸುತ್ತದೆ. ತುರ್ತು ಸಂದರ್ಭದಲ್ಲಿ ಸಹಾಯವಾಣಿಯು ಸೇವೆಯಿಂದ ತಕ್ಷಣ ಸಹಾಯ ಲಭಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು. ಸರ್ಕಾರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇನ್ನು ಸೂಚಿಸಿಲ್ಲ. ಆದರೆ ಇದು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಅರ್ಜಿದಾರರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

Also Read :-  IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ಸಂಧ್ಯಾ ಸುರಕ್ಷಾ ಯೋಜನೆಯಿಂದ ವಯಸ್ಕರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು. ಏಕೆಂದರೆ ವಯಸ್ಸಾದವರ ಜೀವನವನ್ನು ಸಾವಲಂಭಿಯಾಗಿ ಮತ್ತು ಉತ್ತಮವಾಗಿ ನಡೆಸಲು ಸರ್ಕಾರವೇ ಸಂಧ್ಯಾ ಸುರಕ್ಷಾ ಯೋಜನೆ ಎಂಬ ಅತ್ಯುತ್ತಮ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಯೋಜನೆಯಿಂದ ಅರ್ಜಿದಾರರಿಗೆ ಪ್ರತಿ ತಿಂಗಳು  ₹ 1,200 ರೂಪಾಯಿ ನೇರವಾಗಿ ವಯಸ್ಕರ ಖಾತೆಗೆ ಜಮವಾಗುತ್ತದೆ. ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ. ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ. 

ಅರ್ಜಿ ಸಲ್ಲಿಸುವ ಲಿಂಕ್ 

Apply Link : https://nadakacheri.karnataka.gov.in/AJSK/ 

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment